ಶ್ರೀ ಮಹಾದೇವ್ ಮತ್ತು ಕಾಜಲ್ ಕುಂದರ್ ಜೋಡಿಯಲ್ಲಿ ಮೂಡಿಬರಲಿದೆ ‘ಅರಿಹ’. ಇತ್ತೀಚೆಗೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.
ನಿರ್ದೇಶಕ ಆದರ್ಶ್ ಈಶ್ವರಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದರು. ಹಿರಿಯ ನಟಿ ಭವ್ಯಾ ಇದ್ದರು. ಮೋಹನ್ ಕುಮಾರ್ ಎಚ್. ಈ ಚಿತ್ರದ ನಿರ್ದೇಶಕರು.ಎಂ.ಪಿ. ಪ್ರೊಡಕ್ಷನ್ ಅಡಿಯಲ್ಲಿ ಸಿ.ಪಿ.ಆರ್.ಗೌಡ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಇರುವುದೆಲ್ಲವ ಬಿಟ್ಟು, ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಖ್ಯಾತಿಯ ಶ್ರೀ (ಶ್ರೀಮಹಾದೇವ್) ನಾಯಕ, ಕಾಜಲ್ ಕುಂದರ್ ನಾಯಕಿ. ‘ಕಮರೊಟ್ಟು ಚೆಕ್ಪೋಸ್ಟ್, ಭೈರವ, ಒಲವೇ ಮಂದಾರ-2, ‘ಚಿ.ತು.ಯುವಕರ ಸಂಘ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸನತ್ ‘ಅರಿಹ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ಆರ್.ಜೆ.ವಿಕ್ಕಿ, ಅಶೋಕ್ ಶರ್ಮಾ, ಶ್ವೇತಾ ಆರ್. ಪ್ರಸಾದ್, ಧನುಶ್ರೀ, ವೈನ್ ಸ್ಟೋರ್ ರಘುಗೌಡ, ಅನಘ ಸಾಗರ್, ಹರ್ಷಿತಾ ಸೇರಿದಂತೆ ಇತರ ತಾರಾಬಳಗ ಸಿನಿಮಾದಲ್ಲಿದೆ.