‘ಯಾವುದೇ ಸಿನಿಮಾ ಆಗಿರಲಿ ಅದು ನಿರ್ದೇಶಕನ ಆಯ್ಕೆಯಂತೆಯೇ ನಡೆಯಬೇಕು. ಸಿನಿಮಾದ ಗೆಲುವು, ಸೋಲು ಅವರ ಕೈಯಲ್ಲೇ ಇರುತ್ತದೆ. ಅವರಿಗೆ ಇರುವ ದೃಷ್ಟಿಕೋನವನ್ನು ನಟ, ನಟಿಯರು ಗೌರವಿಸಿದರಷ್ಟೇ ನಮ್ಮ ಸಿನಿ ಬದುಕು ಉತ್ತಮವಾಗಿರುತ್ತದೆ’ ಎಂದು ಅರ್ಜುನ್ ಹೇಳಿರುವುದು ಟ್ರೋಲ್ ಆಗಿದೆ. ಇದನ್ನು ಬಹುತೇಕ ಬಾಲಿವುಡ್ ನಟ, ನಟಿಯರು ಒಪ್ಪಿಕೊಂಡು ಟ್ವೀಟ್ ಮಾಡಿದ್ದಾರೆ.ಆಶುತೋಷ್ ಗೌರೀಕರ್ ಅವರ ‘ಪಾಣಿಪತ್’ ಸಿನಿಮಾದಲ್ಲಿ ಅರ್ಜುನ್ ನಟಿಸುತ್ತಿದ್ದಾರೆ.