ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುದ್ದು ಸಹಿ ವಿನಾಯ್ತಿ ನೀಡುವಂತೆ ಹೈಕೋರ್ಟ್‌ಗೆ ಆರ್ಯನ್‌ ಖಾನ್‌ ಮನವಿ

Last Updated 11 ಡಿಸೆಂಬರ್ 2021, 7:16 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಮಗ, ಐಷಾರಾಮಿ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಬಿಡುಗಡೆಯಾಗಿರುವ ಆರ್ಯನ್‌ ಖಾನ್‌ ಬಾಂಬೆ ಹೈಕೋರ್ಟ್‌ಗೆ ವಿಶೇಷ ಮನವಿಮಾಡಿದ್ದಾರೆ.

ಆರ್ಯನ್‌ ಖಾನ್‌, ವಕೀಲರ ಮೂಲಕಈ ಮನವಿ ಸಲ್ಲಿಸಿದ್ದು ಪ್ರತಿ ವಾರ ಎನ್‌ಸಿಬಿ ಕಚೇರಿಗೆ ಹೋಗಿ ಹಾಜರಿ ಹಾಕುವ ಷರತ್ತಿನಿಂದ ಬಿಡುಗಡೆ ಮಾಡುವಂತೆಕೋರಿದ್ದಾರೆ.

ಈಗಾಗಲೇ ಈ ಪ್ರಕರಣವನ್ನು ದೆಹಲಿಯ ವಿಶೇಷ ತಂಡಕ್ಕೆ ವಹಿಸಿರುವುದರಿಂದ ಎನ್‌ಸಿಬಿ ಕಚೇರಿಗೆ ಹೋಗಿ ಸಹಿ ಹಾಕುವ ಅವಶ್ಯಕತೆ ಇರುವುದಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

22 ದಿನಗಳ ನಂತರ ಅಕ್ಟೋಬರ್‌ 30ರಂದು ಇಲ್ಲಿನ ಆರ್ಥರ್‌ ರೋಡ್‌ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಶಾರುಕ್‌ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್‌ಗೆಜಾಮೀನುಭದ್ರತೆ ನೀಡಿದ್ದರು. ಅಲ್ಲದೇ ನ್ಯಾಯಾಲಯ ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ತೆರಳಿ ಖುದ್ದಾಗಿ ಸಹಿ ಹಾಕುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT