ಟೀಸರ್ನಲ್ಲಿ ರಾಜಕಾರಣಿ ಪಾತ್ರದಲ್ಲಿ ಮೋಹನ್ಲಾಲ್ ಹಾಗೂ ಸೂರ್ಯನ ನಟನೆಯು ಚಿತ್ರಕತೆಯ ಬಗ್ಗೆ ಕುತೂಹಲ ಕೆರಳಿಸಿದ್ದು, ಇದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಭಯೋತ್ಪಾದನೆ ಕೃತ್ಯವು ಭಾರತ– ಪಾಕಿಸ್ತಾನದ ಮೇಲೆ ಬೀರುವ ಪರಿಣಾಮ, ಎರಡು ದೇಶಗಳ ಸಂಬಂಧ, ರೈತರು ಅನುಭವಿಸುತ್ತಿರುವ ಸಂಕಟಗಳು, ನದಿ ನೀರಿನ ಹಂಚಿಕೆ ವಿಚಾರ, ಭಾರತೀಯ ಸೇನೆಯ ರಹಸ್ಯ ಕಾರ್ಯಾಚರಣೆ– ಈ ವಿಚಾರಗಳನ್ನು ಸಿನಿಮಾ ಕತೆ ಒಳಗೊಂಡಿವೆ.