ನಿರ್ದೇಶಕ ಶ್ರೀಕಾಂತ್ ಆಚಾರ್ಯ, ‘ಸಿನಿಮಾ ಎಂದರೆ ಗಾಂಧಿನಗರ ಎನ್ನುವ ಅರ್ಥವಿದೆ. ಬಳ್ಳಾರಿಯಂತಹ ಗಡಿ ಭಾಗದಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಕಾಣುವುದಿಲ್ಲ. ಅಲ್ಲಿ ತೆಲುಗಿನ ಚಿತ್ರಗಳದ್ದೇ ಅಬ್ಬರ. ಪರಭಾಷೆಯ ಚಿತ್ರಗಳು ಶತ ದಿನಗಳ ಪ್ರದರ್ಶನ ಕಾಣುತ್ತವೆ. ಒಳ್ಳೆಯ ಸಿನಿಮಾ ನಿರ್ಮಿಸಿದರೆ ಗಡಿ ಭಾಗದಲ್ಲೂ ಉತ್ತಮ ಪ್ರದರ್ಶನ ಕಾಣುತ್ತವೆ. ಅದಕ್ಕಾಗಿಯೇ ಈ ಸಿನಿಮಾ ಮಾಡಿದ್ದೇವೆ’ ಎಂದು ವಿವರಿಸಿದರು.