ಮೂಡಿ ನಂಜಪ್ಪ, ಗೂಬೆ ಖಾನ್, ಮರಕುಟುಕ, ಸಗಣಿ ಖಾನ್, ರೇಡಿಯೊ ರಾಜ್ ಹೀಗೆ ಈ ಸಿನಿಮಾದ ಪಾತ್ರಗಳು ಜೀವ ತಳೆದಿವೆ. ನಾಯಕ ಡಿಟೆಕ್ಟಿವ್ ದಿವಾಕರ ಒಂದು ಕೇಸ್ ಅನ್ನು ಯಾವ ರೀತಿ ತನಿಖೆ ನಡೆಸುತ್ತಾನೆ ಎನ್ನುವುದು ಥ್ರಿಲ್ ಆಗಿ ಕಟ್ಟಿಕೊಡಲಾಗಿದೆಯಂತೆ. ಹಳೆಯ ಉತ್ಪನ್ನಗಳ ಭಾವಚಿತ್ರಗಳನ್ನು ಬಳಸಿಕೊಂಡು ಚಿತ್ರದ ಪ್ರಚಾರ ಕಾರ್ಯ ಆರಂಭಿಸಲಾಗಿದೆ.