ಚೇತನ್ ಕುಮಾರ್ ನಿರ್ದೇಶನದ ನಟ ಶ್ರೀಮುರಳಿ ನಟನೆಯ ‘ಭರಾಟೆ’ ಚಿತ್ರದಲ್ಲಿ ಈ ಮೂವರು ಸಹೋದರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರವಿಶಂಕರ್ ಮತ್ತು ಅಯ್ಯಪ್ಪ ಅವರ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆಯಂತೆ. ಶೀಘ್ರವೇ, ಸಾಯಿಕುಮಾರ್ ಅವರು ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರಂತೆ.
ರವಿಶಂಕರ್ ಮತ್ತು ಸಾಯಿಕುಮಾರ್ ಕನ್ನಡ ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಯ್ಯಪ್ಪ ಅವರು ‘ಕೆಜಿಎಫ್’ ಚಿತ್ರದಲ್ಲೂ ನಟಿಸಿದ್ದಾರೆ. ‘ಭರಾಟೆ’ ಕೌಟುಂಬಿಕ ಪ್ರಧಾನ ಚಿತ್ರವಾಗಿದೆ.