ವಕೀಲ ರಿಜ್ವಾನ್ ಸಿದ್ದಿಕಿ ಮೂಲಕ ಸಲ್ಲಿಸಿರುವ ಮನವಿಯಲ್ಲಿ, ತಾವು ತಮ್ಮ ವೃತ್ತಿಯ ಹೊಣೆಗಾರಿಕೆಯಿಂದಾಗಿ ದೇಶದ ಹಲವು ಭಾಗಗಳಿಗೆ ಮತ್ತು ವಿದೇಶಗಳಿಗೂ ಪ್ರಯಾಣಿಸುವ ಅಗತ್ಯವಿದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿನೀಡಬೇಕು. ಮಾತ್ರವಲ್ಲದೆ, ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾದರೆಮುಂಬೈನಿಂದ ತಮ್ಮ ಕಾರ್ಯಸ್ಥಳಗಳಿಗೆ ದೂರದ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ತಮಗೆ ಅನಗತ್ಯ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.