ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನರೆಸ್ಟೋರೆಂಟ್ವೊಂದರ ಎದುರು ಭಾನುವಾರ ಕಾಣಿಸಿಕೊಂಡರು. ಮಾಧ್ಯಮದವರಷ್ಟೇ ಅಲ್ಲ, ಅಭಿಮಾನಿಗಳೂಅವರನ್ನು ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಬಿದ್ದರು.ಈ ವೇಳೆ ಆತಂಕಕ್ಕೊಳಗಾಗದ ನಟಿ, ಸ್ಮೈಲ್ ಮಾಡುತ್ತಲೇ ಪೋಸ್ ನೀಡಿದ್ದಾರೆ.
ಅಲ್ಲೇ ಇದ್ದ ಕೆಲವರ ನೆರವಿನಿಂದ ತಮ್ಮ ಕಾರಿನ ಬಳಿ ತಲುಪಿದ ಮಂದಣ್ಣ ಮತ್ತೆ ಕ್ಯಾಮೆರಾಗಳಿಗೆ ಫೋಸ್ ನೀಡಿ, ನಂತರ ಸುರಕ್ಷಿತವಾಗಿ ತೆರಳಿದ್ದಾರೆ. ಈ ವಿಡಿಯೊಇದೀಗ ಇನ್ಸ್ಟಾಗ್ರಾಂನಲ್ಲಿವೈರಲ್ ಆಗಿದೆ. ರಶ್ಮಿಕಾ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
'ಅಭಿಮಾನಿಗಳೊಂದಿಗೆ ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಬಾಲಿವುಡ್ ನಟಿಯರು ರಶ್ಮಿಕಾರಿಂದ ಕಲಿಯಬೇಕು' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
'ಅನಿಮಲ್' ಸಿನಿಮಾದ ಮೊದಲ ಹಂತದ ಚಿತ್ರೀಕರಣದ ಬಳಿಕ ರಶ್ಮಿಕಾ ಅವರು ಹಿಮಾಚಲ ಪ್ರದೇಶದಿಂದ ವಾಪಸ್ ಆಗಿದ್ದಾರೆ. 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಣಬೀರ್ ಹಾಗೂ ರಶ್ಮಿಕಾ ಚಿತ್ರೀಕರಣದ ಸೆಟ್ನಲ್ಲಿದ್ದ ಚಿತ್ರಗಳು ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆಗಿದ್ದವು.