ಫೇಸ್ಬುಕ್ನ ಶ್ರೀಮಲೆಮಹದೇಶ್ವರ ಸ್ವಾಮಿ- ದಕ್ಷಿಣ ದ್ವಾರ ಹನೂರು ಕ್ಷೇತ್ರದ ಪೇಜ್ನಲ್ಲಿ ಚಂದನ್ ಶೆಟ್ಟಿ ಅವರನ್ನು ಕುರಿತು ಬರೆದಿರುವ ಸಾರಾಂಶ ಇಂತಿದೆ: ‘ಚಂದನ್ ಶೆಟ್ಟಿ, ನೀವು ಮಹಾ ಕಲಾವಿದರು. ಆದರೆ, ನಮ್ಮ ಜಾನಪದದಲ್ಲಿ ನಾವು ಶಿವಶರಣೆ ಶಂಕಮ್ಮ ಅವರನ್ನೂ ಪೂಜಿಸುತ್ತೇವೆ. ಆದರೆ, ನಿಜವಾಗಲೂ ನೀಲೇಗೌಡ ಆಕೆಯನ್ನು ಅನುಮಾನಿಸಲಿಲ್ಲ. ಯಾರಾದರೂ ಮರುಳು ಮಾಡಿ ತನ್ನಿಂದ ದೂರ ಆಗಬಾರದೆಂದು ಆಕೆಗೆ ಕಷ್ಟಕೋಟಲೆ ಕೊಟ್ಟು ಹೆಜ್ಜೇನು ಬೇಟೆಗೆ ಹೋರಡುತ್ತಾನೆ. ಆದರೆ, ಈ ರೀತಿ ಮಾದಕವಾಗಿ ತೋರಿಸುವ ಅವಶ್ಯಕತೆ ಏನಿತ್ತು?’ ಎಂದು ಪ್ರಶ್ನಿಸಿದ್ದಾರೆ.