ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ನಲ್ಲಿ ಸಿನಿಮಾಟೊಗ್ರಫಿ ಕಲಿತ ಅವರು, ಮುಂಬೈನಲ್ಲಿ ಕನ್ನಡಿಗರೇ ಆದ ವಿ.ಕೆ. ಮೂರ್ತಿ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ವಿ.ಕೆ. ಮೂರ್ತಿ ಛಾಯಾಗ್ರಹಣ ಮಾಡಿರುವ ‘ಪ್ಯಾಸಾ’, ‘ಕಾಗಝ್ ಕೆ ಫೂಲ್’ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ‘ಬಾರ್ಡರ್’, ‘ಘಾತಕ್’, ‘ಅಂದಾಜ್’, ‘ಢಾಯಿ ಅಕ್ಷರ್ ಪ್ರೇಮ್ ಕೆ’, ‘ಅಂದಾಜ್ ಅಪ್ನಾ ಅಪ್ನಾ’, ‘ದಾಮಿನಿ’, ‘ಬಟ್ವಾರಾ’, ‘ಗುಲಾಮಿ’, ‘ಹತ್ಯಾರ್’, ‘ಯತೀಮ್’ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.