‘ಕಾಕ್ಟೈಲ್’ ಎಂದರೆ ತಕ್ಷಣ ಪಾನೀಯ ನೆನಪಿಗೆ ಬರುತ್ತದೆ. ಆದರೆ, ಇಲ್ಲಿ ಅದೇ ಹೆಸರಿನಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಶ್ರೀರಾಮ್ ಅವರ ಕಥೆ, ಸಂಭಾಷಣೆ ನಿರ್ದೇಶನವಿದೆ. ರಾಜಾಜಿನಗರದ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಹೂರ್ತ ನಡೆದಿದೆ.
ವೀರೇಶ್ ಕೇಶವ್ ನಾಯಕ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಲೋಕಿ ಅವರ ಸಂಗೀತ, ರವಿವರ್ಮ ಅವರ ಛಾಯಾಗ್ರಹಣ, ಮೋಹನ್ ಅವರ ಸಂಕಲನ ಈ ಚಿತ್ರಕ್ಕಿದೆ.ಜಯಲಕ್ಷೀ ಕಂಬೈನ್ಸ್ ಬ್ಯಾನರ್ ಅಡಿ ಡಾ.ಶಿವಪ್ಪ ಅವರು ಚಿತ್ರ ನಿರ್ಮಿಸುತ್ತಿದ್ದಾರೆ ಬೆಂಗಳೂರು– ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.