ಆದ್ದರಿಂದ ಈಗ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಬರುತ್ತಿದೆ. ಅದರಲ್ಲಿ ಹಲವರು ಕೆಲಸ ಮಾಡಿದ್ದಾರೆ. ಅಪ್ಪಾಜಿ ಆಗಿರಬಹುದು (ಅಂಬರೀಷ್), ರವಿ ಸರ್, ಅರ್ಜುನ್ ಸರ್, ಶ್ರೀನಿವಾಸಮೂರ್ತಿ ಅವರು, ಆಮೇಲೆ ನಿಖಿಲ್ ಆಗಿರಬಹುದು. ತುಂಬಾ ಜನರು ಕೆಲಸ ಮಾಡಿದ್ದಾರೆ. ಎಲ್ಲರೂ ಇದ್ದಾರೆ. ನೀವು ನನಗೆ ಹೆಂಗೆ ಮರ್ಯಾದೆ ಕೊಡುತ್ತೀರೋ ಆ ಸಿನಿಮಾದಲ್ಲಿನ ಪ್ರತಿಯೊಬ್ಬರಿಗೂ ಅದೇ ರೀತಿ ಮರ್ಯಾದೆ ಕೊಡಬೇಕು. ಫೋಟೊ ಹಾಕಿಲ್ಲ, ಕಟೌಟ್ ನಿಲ್ಸಿಲ್ಲ ಅಂತ, ಥಿಯೇಟರ್ನಲ್ಲಿ ಕಚ್ಚಾಡದೆ ಎಲ್ಲರೂ ಕೂತು ನೋಡಬೇಕು.
‘ಏಕೆಂದರೆ ಕುರುಕ್ಷೇತ್ರದಂತಹ ಸಿನಿಮಾ ಮಾಡುವುದೇ ದೊಡ್ಡ ಕಷ್ಟ. ಮುನಿರತ್ನ ಈ ರೀತಿ ಸಿನಿಮಾ ಮಾಡಿದ್ದಾರೆ. ಇಲ್ಲಿ ಯಾರಿಗೋ ಕಟೌಟ್ ಹಾಕಲಿಲ್ಲ. ಇನ್ನೊಂದು ಮಾಡಿಲ್ಲ ಎಂದು ಗಲಾಟೆ ಮಾಡಬಾರದು. ಮನೆ ಮಂದಿಯಲ್ಲಾ ಕುಳಿತು ಒಬ್ಬ ದುರ್ಯೋಧನನನ್ನು, ಒಬ್ಬ ಅರ್ಜುನನನ್ನು, ಒಬ್ಬ ಕರ್ಣನನ್ನು ಹೇಗೆ ನೋಡ್ತಿರಾ... ಅದನ್ನು ನೋಡಿ... ಇದೇ ನಾನು ನಿಮಗೆ ಕೊಡ್ತಿರೋ ಚಾಲೆಂಜ್. ಯಾರೂ ಗಲಾಟೆ ಮಾಡಿಕೊಳ್ಳದೆ, ತುಂಬಾ ಪ್ರೀತಿಯಿಂದ ಸಿನಿಮಾ ನೋಡಬೇಕು’.