ಕೊಪ್ಪ: ಹೋಬಳಿ ಪಣ್ಣೆದೊಡ್ಡಿ ಗ್ರಾಮದ ಶ್ರೀನಿವಾಸ್ ಮತ್ತು ದಂಪತಿಯ ಪುತ್ರಿ ಪೂರ್ವಿಕಾ (10) ಅವರು ದರ್ಶನ್ ಅಭಿಮಾನಿಯಾಗಿದ್ದು ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ.
ಪೂರ್ವಿಕಾ ಅವರು ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ದರ್ಶನ್ ಅಭಿಮಾನಿಯಾಗಿದ್ದ ಪೂರ್ವಿಕಾ ಅವರು ದರ್ಶನ್ ಅವರನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದಾಗ ದರ್ಶನ್ ಅವರು ಪೂರ್ವಿಕಾಳನ್ನು ಭೇಟಿಯಾಗಿ ಆಸೆ ಈಡೇರಿಸಿದ್ದರು.