‘ಇತಿಹಾಸವು ದಾಖಲೆ ಮತ್ತು ಸತ್ಯವನ್ನು ಆಧರಿಸಿರಬೇಕು. ನಿರೂಪಣೆಯ ಆಧಾರ ಇರಬಾರದು. ಭಾರತದಲ್ಲಿ, ಬಹಳಷ್ಟು ಜನರು ನಿರೂಪಣೆ, ರಾಜಕೀಯದ ಆಧಾರದ ಮೇಲೆ ಇತಿಹಾಸವನ್ನು ಬರೆಯುತ್ತಾರೆ. ಆದರೆ, ಅವರ ರಾಜಕೀಯ ಕಾರ್ಯಸೂಚಿಯು ಪಾಶ್ಚಾತ್ಯ ಜಾತ್ಯತೀತ ಕಾರ್ಯಸೂಚಿಯನ್ನು ಆಧರಿಸಿದೆ ಎಂಬುದೇ ಸಮಸ್ಯೆ. ಈ ಕಾರ್ಯಸೂಚಿಯಲ್ಲಿ ಹಿಂದೂ ನಾಗರಿಕತೆಯನ್ನು ಯಾವಾಗಲೂ ನಿರ್ಲಕ್ಷಿಸಲಾಗುತ್ತದೆ. ನಾವು ದುರ್ಬಲರು, ನಾವು ಕಲಿತದ್ದೆಲ್ಲವೂ ಪಾಶ್ಚಾತ್ಯರಿಂದ ಅಥವಾ ಆಕ್ರಮಣಕಾರಿಗಳಿಂದ ಎಂದು ನಂಬುವಂತೆ ಮಾಡಲಾಗುತ್ತದೆ‘ ಎಂದು ಅವರು ಪ್ರತಿಪಾದಿಸಿದರು. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.