ಈ ಚಿತ್ರಕ್ಕೆ ಬಂಡವಾಳ ಹೂಡಿರುವವರು ತೆಲುಗಿನ ಟಿ. ಸುಲ್ತಾನ್. ನಿರ್ದೇಶನದ ಹೊಣೆ ಕನ್ನಡಿಗರಾದ ಕಸ್ತೂರಿ ಜಗನ್ನಾಥ್ ಅವರದ್ದು. ಇವರಿಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾದಾಗ ದುಭಾಷಿಯನ್ನು ನಡುವಿನಲ್ಲಿ ಇರಿಸಿಕೊಂಡು ಸಂವಹನ ನಡೆಸುತ್ತಿದ್ದರಂತೆ! ಅಂದಹಾಗೆ, ಸುಲ್ತಾನ್ ಅವರು ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಿರುವುದು ಇದೇ ಮೊದಲು.