ಕಾಂಗ್ರೆಸ್ ಸರ್ಕಾರದ ಘೋಷಣೆ ‘ಗರೀಬಿ ಹಠಾವೊ’ ಎಂಬುದು. ಅಂದರೆ ಬಡತನದ ನಿರ್ಮೂಲನೆ. ಘೋಷಣೆ ಏನೋ ಚೆನ್ನಾಗಿದೆ. ಆದರೆ ಅನುಷ್ಠಾನ? ಬಡತನದ ನಿರ್ಮೂಲನೆ ಆದಾಗ ಅದರ ಸ್ಥಾನದಲ್ಲಿ ಸಿರಿವಂತಿಕೆ ಇರಬೇಕಲ್ಲವೇ? ಆದರೆ, ಉಚಿತವಾಗಿ ಒಂದಿಷ್ಟು ಅಕ್ಕಿ, ಬೇಳೆಗಳನ್ನು ಬಡವರಿಗೆ ಕೊಡುತ್ತಾ ಹೋದರೆ ಅವರು ಯಾವ ಕಾಲಕ್ಕೆ ಉದ್ಧಾರವಾಗಿ ಶ್ರೀಮಂತರಾಗುತ್ತಾರೆ? ಅವರು ಯಾವಾಗ ತಂದೆ– ತಾಯಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರುವಂತಾಗುತ್ತಾರೆ?