<p>ಎಲ್ಪಿಜಿ ಅಭಾವದಿಂದಾಗಿ ಆಟೊಗಳ ಸಂಚಾರ ಸ್ಥಗಿತಗೊಳ್ಳುತ್ತಿವೆ. ಇದೀಗ, ಚಂದನವನದ ನಟ ಧ್ರುವ ಸರ್ಜಾ ಅವರು ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ಧನ ಸಹಾಯದ ಜೊತೆ ಈ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. </p><p>ಈ ಕುರಿತು ಪೋಸ್ಟ್ ಹಂಚಿಕೊಂಡ ಅವರು, ‘ಆಟೊ ಚಾಲಕರು ನಮ್ಮ ದೇಶದ ಬೆನ್ನೆಲುಬು. ಅವರು ಪ್ರತಿದಿನ ದಿನ ದುಡಿದು ತಮ್ಮ ಕುಟುಂಬಕಕ್ಕೆ ಮಾತ್ರವಲ್ಲದೇ, ಸಾರ್ವಜನಿಕವಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಈ ಬಿಕ್ಕಟ್ಟಿನಿಂದ ಕುಟುಂಬದ ಜವಾಬ್ದಾರಿ ಹೊರಲು ಕಷ್ಟಪಡುತ್ತಿದ್ದಾರೆ. ಎಲ್ಲೂ ಎಲ್ಪಿಜಿ ಗ್ಯಾಸ್ ಸಿಗುತ್ತಿಲ್ಲ. ಎಲ್ಲಾ ಆಟೊಗಳು ನಿಂತಿವೆ’ ಎಂದು ಹೇಳಿದ್ದಾರೆ. </p>.<p>‘ಒಂದು ವೇಳೆ ಗ್ಯಾಸ್ ಸಿಕ್ಕಿದರೂ ಕೂಡ ಅದಕ್ಕೆ ಎರಡು ಪಟ್ಟು ಬೆಲೆ ನೀಡಿ ಖರೀದಿಸಬೇಕು. ಇಂತಹ ಕಷ್ಟದಲ್ಲೂ ತಮ್ಮ ಕುಟುಂಬವನ್ನು ನಿಭಾಯಿಸಲೇಬೇಕು. ನಾನು ಯಾವ ಪಕ್ಷದ ಬಗ್ಗೆಯೂ ಮಾತನಾಡುತ್ತಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಟೊ ಚಾಲಕರ ಪರವಾಗಿ ನಾನು ಮನವಿ ಮಾಡುಕೊಳ್ಳುತ್ತೇನೆ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಲ್ಪಿಜಿ ಅಭಾವದಿಂದಾಗಿ ಆಟೊಗಳ ಸಂಚಾರ ಸ್ಥಗಿತಗೊಳ್ಳುತ್ತಿವೆ. ಇದೀಗ, ಚಂದನವನದ ನಟ ಧ್ರುವ ಸರ್ಜಾ ಅವರು ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ಧನ ಸಹಾಯದ ಜೊತೆ ಈ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. </p><p>ಈ ಕುರಿತು ಪೋಸ್ಟ್ ಹಂಚಿಕೊಂಡ ಅವರು, ‘ಆಟೊ ಚಾಲಕರು ನಮ್ಮ ದೇಶದ ಬೆನ್ನೆಲುಬು. ಅವರು ಪ್ರತಿದಿನ ದಿನ ದುಡಿದು ತಮ್ಮ ಕುಟುಂಬಕಕ್ಕೆ ಮಾತ್ರವಲ್ಲದೇ, ಸಾರ್ವಜನಿಕವಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಈ ಬಿಕ್ಕಟ್ಟಿನಿಂದ ಕುಟುಂಬದ ಜವಾಬ್ದಾರಿ ಹೊರಲು ಕಷ್ಟಪಡುತ್ತಿದ್ದಾರೆ. ಎಲ್ಲೂ ಎಲ್ಪಿಜಿ ಗ್ಯಾಸ್ ಸಿಗುತ್ತಿಲ್ಲ. ಎಲ್ಲಾ ಆಟೊಗಳು ನಿಂತಿವೆ’ ಎಂದು ಹೇಳಿದ್ದಾರೆ. </p>.<p>‘ಒಂದು ವೇಳೆ ಗ್ಯಾಸ್ ಸಿಕ್ಕಿದರೂ ಕೂಡ ಅದಕ್ಕೆ ಎರಡು ಪಟ್ಟು ಬೆಲೆ ನೀಡಿ ಖರೀದಿಸಬೇಕು. ಇಂತಹ ಕಷ್ಟದಲ್ಲೂ ತಮ್ಮ ಕುಟುಂಬವನ್ನು ನಿಭಾಯಿಸಲೇಬೇಕು. ನಾನು ಯಾವ ಪಕ್ಷದ ಬಗ್ಗೆಯೂ ಮಾತನಾಡುತ್ತಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಟೊ ಚಾಲಕರ ಪರವಾಗಿ ನಾನು ಮನವಿ ಮಾಡುಕೊಳ್ಳುತ್ತೇನೆ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>