<p>ಧುರಂದರ್ : ದಿ ರಿವೆಂಜ್ ಚಿತ್ರವನ್ನು ದಕ್ಷಿಣ ಭಾರತದ ನಟರು ಪ್ರಶಂಶಿಸಿರುವುದನ್ನು ನಟ ಪ್ರಕಾಶ್ ರಾಜ್ ಪರೋಕ್ಷವಾಗಿ ಟೀಕಿಸಿದ್ದಾರೆ. ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.</p><p>ಈ ಚಿತ್ರ ಕುರಿತು ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ‘ಹಮ್ ದೋನೋ’ ಚಿತ್ರದ ‘ಅಭಿ ನಾ ಜಾವೋ ಚೋಡ್ ಕರ್’ ಹಾಡನ್ನು ಶೇರ್ ಮಾಡಿಕೊಂಡು ‘ಧುರಂಧರ್’ ನಿಂದ ನಾನು ತುಂಬಾ ದೂರ ಇದ್ದೇನೆ’ ಎಂದಿದ್ದರು.</p>.ರಣವೀರ್ ಸಿಂಗ್ ನಟನೆಯ ‘ಧುರಂಧರ್–2’ ಇಂದಿನಿಂದ ಕನ್ನಡದಲ್ಲಿ ಬಿಡುಗಡೆ.DKD: ತೀರ್ಪುಗಾರರ ಮನಗೆದ್ದು ಫಿನಾಲೆ ಟಿಕೆಟ್ ಪಡೆದ ಈ ಜೋಡಿ.<p>ಪ್ರಕಾಶ್ ರಾಜ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ವೆಲ್ಲು ಎಂಬುವರು ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಜೂನಿಯರ್ ಎನ್ಟಿಆರ್ ಮಹೇಶ್ ಬಾಬು ಸೇರಿದಂತೆ ಅನೇಕರು ಈ ಚಿತ್ರವನ್ನು ಪ್ರಶಂಸಿದ್ದಾರೆ. ಆದರೆ ಬಾಲಿವುಡ್ ನಟರು ಯಾರು ಕೂಡ ‘ಧುರಂಧರ್–2’ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದರು. </p><p>ಇವರ ಪೋಸ್ಟ್ಗೆ ಉತ್ತರಿಸಿದ ಪ್ರಕಾಶ್ ರಾಜ್, ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದಿದ್ದಾರೆ. ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಈ ಚಿತ್ರದ ಕುರಿತು ನಟಿ ರಮ್ಯಾ ಅವರು ‘ಧುರಂಧರ್2‘ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಹೋದರೆ ಸಮಯ ಹಾಗೂ ಹಣ ವ್ಯರ್ಥ ಆಗುತ್ತದೆ' ಎಂದಿದ್ದರು. </p><p>ರಾಜಮೌಳಿ ಅವರು ‘4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಕ್ಷಣದವರೆಗೂ ಜನರನ್ನು ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ ಎಂದು‘ ಹೇಳಿಕೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧುರಂದರ್ : ದಿ ರಿವೆಂಜ್ ಚಿತ್ರವನ್ನು ದಕ್ಷಿಣ ಭಾರತದ ನಟರು ಪ್ರಶಂಶಿಸಿರುವುದನ್ನು ನಟ ಪ್ರಕಾಶ್ ರಾಜ್ ಪರೋಕ್ಷವಾಗಿ ಟೀಕಿಸಿದ್ದಾರೆ. ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.</p><p>ಈ ಚಿತ್ರ ಕುರಿತು ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ‘ಹಮ್ ದೋನೋ’ ಚಿತ್ರದ ‘ಅಭಿ ನಾ ಜಾವೋ ಚೋಡ್ ಕರ್’ ಹಾಡನ್ನು ಶೇರ್ ಮಾಡಿಕೊಂಡು ‘ಧುರಂಧರ್’ ನಿಂದ ನಾನು ತುಂಬಾ ದೂರ ಇದ್ದೇನೆ’ ಎಂದಿದ್ದರು.</p>.ರಣವೀರ್ ಸಿಂಗ್ ನಟನೆಯ ‘ಧುರಂಧರ್–2’ ಇಂದಿನಿಂದ ಕನ್ನಡದಲ್ಲಿ ಬಿಡುಗಡೆ.DKD: ತೀರ್ಪುಗಾರರ ಮನಗೆದ್ದು ಫಿನಾಲೆ ಟಿಕೆಟ್ ಪಡೆದ ಈ ಜೋಡಿ.<p>ಪ್ರಕಾಶ್ ರಾಜ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ವೆಲ್ಲು ಎಂಬುವರು ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಜೂನಿಯರ್ ಎನ್ಟಿಆರ್ ಮಹೇಶ್ ಬಾಬು ಸೇರಿದಂತೆ ಅನೇಕರು ಈ ಚಿತ್ರವನ್ನು ಪ್ರಶಂಸಿದ್ದಾರೆ. ಆದರೆ ಬಾಲಿವುಡ್ ನಟರು ಯಾರು ಕೂಡ ‘ಧುರಂಧರ್–2’ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದರು. </p><p>ಇವರ ಪೋಸ್ಟ್ಗೆ ಉತ್ತರಿಸಿದ ಪ್ರಕಾಶ್ ರಾಜ್, ‘ಋಣ ತೀರಿಸುವ ಚಾಳಿ ದಕ್ಷಿಣಕ್ಕೂ ಹರಡುತ್ತಿದೆ’ ಎಂದಿದ್ದಾರೆ. ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಈ ಚಿತ್ರದ ಕುರಿತು ನಟಿ ರಮ್ಯಾ ಅವರು ‘ಧುರಂಧರ್2‘ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಹೋದರೆ ಸಮಯ ಹಾಗೂ ಹಣ ವ್ಯರ್ಥ ಆಗುತ್ತದೆ' ಎಂದಿದ್ದರು. </p><p>ರಾಜಮೌಳಿ ಅವರು ‘4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಕ್ಷಣದವರೆಗೂ ಜನರನ್ನು ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ ಎಂದು‘ ಹೇಳಿಕೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>