<p>ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ನಿನ್ನೆ (ಮಾರ್ಚ್ 19) ಬಿಡುಗಡೆಯಾಗಿದೆ. ಈಗ, ಈ ಚಿತ್ರ ವೀಕ್ಷಿಸಿದ ನಟಿ ರಮ್ಯಾ ಅವರು, ‘ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಬರೆದುಕೊಂಡಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. </p><p><strong>ಪೋಸ್ಟ್ನಲ್ಲಿ ಏನಿದೆ?</strong> </p><p>‘ಈ ಸಿನಿಮಾ ನೋಡುವುದು ಒಂದು ದೊಡ್ಡ ಸಾಹಸ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆ ಪರೀಕ್ಷೆ ಮಾಡಬೇಕು ಎಂಬುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ. ಈ ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಡಬಹುದು. ಕೆಲವು ದೃಶ್ಯಗಳಿಗೆ ನಗು ಬರುತ್ತದೆ. ಈ ಚಿತ್ರ ಒಟಿಟಿಗೆ ಬರುವವರೆಗೂ ಕಾಯಿರಿ. ಒಟಿಟಿಯಲ್ಲಿ ಈ ಚಿತ್ರ ವೀಕ್ಷಿಸಿಲು ಇಷ್ಟಇಲ್ಲದಿದ್ದರೆ, ಕನಿಷ್ಠ ಪಕ್ಷ ಬೇರೆ ಆಯ್ಕೆಗಳು ಇರುತ್ತವೆ. ಈ ಚಿತ್ರ ನೋಡುವುದಕ್ಕಾಗಿ ನಿಮ್ಮ ಹಣ ಹಾಗೂ ಸಮಯ ವ್ಯರ್ಥ ಮಾಡಬೇಡಿ’ ಎಂದಿದ್ದಾರೆ. </p><p>‘ಈ ಚಿತ್ರ ತುಂಬಾ ಬೋರ್ ಆಗುತ್ತದೆ. ಎಷ್ಟೋ ಸಲ ನಾನು ಇದನ್ನು ಯಾಕೆ ನೋಡ್ತಾ ಇದ್ದೀನಿ? ಅಂತ ನಿಮಗೆ ಅನ್ನಿಸಬಹುದು. ಈ ಚಿತ್ರ ನಿರ್ದೇಶಕರಿಗೆ ಮಾರ್ಚ್ 19ರಂದು ಬಿಡುಗಡೆ ಬಗ್ಗೆ ಸರಿ ಮಾಹಿತಿ ಇರಲಿಲ್ಲ ಅನಿಸುತ್ತದೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಎಲ್ಲವೂ ಪರಿಪೂರ್ಣ ಆಗದಿರುವುದು ಈ ಚಿತ್ರದಲ್ಲಿ ಎದ್ದು ಕಾಣಿಸುತ್ತಿದೆ. ‘ಧುರಂಧರ್’ ಮೊದಲ ಭಾಗಕ್ಕೆ ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆ ಚಿತ್ರದಲ್ಲಿ ಕಳೆ ಇತ್ತು. ಆದರೆ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಪ್ರೇಕ್ಷಕರು ಸಂಪೂರ್ಣವಾಗಿ ನಿರಾಸೆಗೊಂಡಿದ್ದಾರೆ. ಥಿಯೇಟರ್ನಲ್ಲಿ ಎಲ್ಲರಲ್ಲೂ ಆ ಬೇಸರ ಎದ್ದು ಕಾಣುತ್ತಿತ್ತು‘ ಎಂದು ಬರೆದುಕೊಂಡಿದ್ದಾರೆ. </p>.‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.<p><strong>ಇದು ಸಿನಿಮಾನಾ ಅಥವಾ ಕೈಪಿಡಿಯಾ? </strong></p><p>‘ಇದು ಕೇವಲ ಒಂದು ಸಿನಿಮಾ ಅಲ್ಲ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವನ್ನಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿ. ಈ ಚಿತ್ರದ ಒಂದೊಂದು ‘ದೃಶ್ಯವು ಕೈಪಿಡಿ’ ಇದ್ದಂತಿದೆ. ಇಂತಹ ಒಂದು ಕೈಪಿಡಿ ನಿಜಕ್ಕೂ ಈ ಚಿತ್ರಕ್ಕೆ ಬೇಕಿರಲಿಲ್ಲ. ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಜೊತೆಯೇ ಪೈಪೋಟಿಗಿಳಿದಂತಿದೆ. ‘ಮುಂದಿನ ದೃಶ್ಯವನ್ನು ಇನ್ನು ಎಷ್ಟು ಹಿಂಸಾತ್ಮಕವಾಗಿ ಮಾಡಬಹುದು? ಎಂದು ಅವರು ಯೋಚಿಸುತ್ತಾ ಹೋದಂತೆ ಈ ಚಿತ್ರವು ಅತಿರೇಕಕ್ಕೆ ಹೋಗಿದೆ. ಅದು ಎಷ್ಟರಮಟ್ಟಿಗೆ ಅಂದರೆ.. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ’ ಎಂದಿದ್ದಾರೆ.</p><p>‘ಈ ಚಿತ್ರದ ಇನ್ನೊಂದು ವಿಶೇಷ.<strong> </strong>ಒಬ್ಬ ಮನುಷ್ಯನ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದರೂ, ಆತ ಎದ್ದು ನಿಂತು ಅರಾಮವಾಗಿ ಡೈಲಾಗ್ ಹೊಡೆಯುತ್ತಾನೆ’ ಎಂದರೆ ಇದಕ್ಕಿಂತ ಉತ್ತಮ ಹಾಸ್ಯ ದೃಶ್ಯ ಇನ್ನೊಂದು ಇರಲು ಸಾಧ್ಯವಿಲ್ಲ.</p><p>ಒಟ್ಟಿನಲ್ಲಿ ‘ಧುರಂಧರ್ 2’ ತುಂಬಾ ನಿರಾಸೆ ಮೂಡಿಸಿದೆ. ‘ರಣವೀರ್, ನೀವು ಇದಕ್ಕಿಂತ ಉತ್ತಮವಾದ ಕೆಲಸ ಮಾಡಬಲ್ಲಿರಿ‘. ಆದಿತ್ಯ ಧರ್ ಅವರೇ, ಈ ಅತಿರೇಕದ ದೇಶಪ್ರೇಮ ಮತ್ತು ಪ್ರಚಾರದ ಕಥೆಗಳು ಈಗ ಹಳೆಯದಾಗಿವೆ. ಇದರಿಂದ ಹೊರಬನ್ನಿ‘ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ನಿನ್ನೆ (ಮಾರ್ಚ್ 19) ಬಿಡುಗಡೆಯಾಗಿದೆ. ಈಗ, ಈ ಚಿತ್ರ ವೀಕ್ಷಿಸಿದ ನಟಿ ರಮ್ಯಾ ಅವರು, ‘ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಬರೆದುಕೊಂಡಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. </p><p><strong>ಪೋಸ್ಟ್ನಲ್ಲಿ ಏನಿದೆ?</strong> </p><p>‘ಈ ಸಿನಿಮಾ ನೋಡುವುದು ಒಂದು ದೊಡ್ಡ ಸಾಹಸ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆ ಪರೀಕ್ಷೆ ಮಾಡಬೇಕು ಎಂಬುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ. ಈ ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಡಬಹುದು. ಕೆಲವು ದೃಶ್ಯಗಳಿಗೆ ನಗು ಬರುತ್ತದೆ. ಈ ಚಿತ್ರ ಒಟಿಟಿಗೆ ಬರುವವರೆಗೂ ಕಾಯಿರಿ. ಒಟಿಟಿಯಲ್ಲಿ ಈ ಚಿತ್ರ ವೀಕ್ಷಿಸಿಲು ಇಷ್ಟಇಲ್ಲದಿದ್ದರೆ, ಕನಿಷ್ಠ ಪಕ್ಷ ಬೇರೆ ಆಯ್ಕೆಗಳು ಇರುತ್ತವೆ. ಈ ಚಿತ್ರ ನೋಡುವುದಕ್ಕಾಗಿ ನಿಮ್ಮ ಹಣ ಹಾಗೂ ಸಮಯ ವ್ಯರ್ಥ ಮಾಡಬೇಡಿ’ ಎಂದಿದ್ದಾರೆ. </p><p>‘ಈ ಚಿತ್ರ ತುಂಬಾ ಬೋರ್ ಆಗುತ್ತದೆ. ಎಷ್ಟೋ ಸಲ ನಾನು ಇದನ್ನು ಯಾಕೆ ನೋಡ್ತಾ ಇದ್ದೀನಿ? ಅಂತ ನಿಮಗೆ ಅನ್ನಿಸಬಹುದು. ಈ ಚಿತ್ರ ನಿರ್ದೇಶಕರಿಗೆ ಮಾರ್ಚ್ 19ರಂದು ಬಿಡುಗಡೆ ಬಗ್ಗೆ ಸರಿ ಮಾಹಿತಿ ಇರಲಿಲ್ಲ ಅನಿಸುತ್ತದೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಎಲ್ಲವೂ ಪರಿಪೂರ್ಣ ಆಗದಿರುವುದು ಈ ಚಿತ್ರದಲ್ಲಿ ಎದ್ದು ಕಾಣಿಸುತ್ತಿದೆ. ‘ಧುರಂಧರ್’ ಮೊದಲ ಭಾಗಕ್ಕೆ ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆ ಚಿತ್ರದಲ್ಲಿ ಕಳೆ ಇತ್ತು. ಆದರೆ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಪ್ರೇಕ್ಷಕರು ಸಂಪೂರ್ಣವಾಗಿ ನಿರಾಸೆಗೊಂಡಿದ್ದಾರೆ. ಥಿಯೇಟರ್ನಲ್ಲಿ ಎಲ್ಲರಲ್ಲೂ ಆ ಬೇಸರ ಎದ್ದು ಕಾಣುತ್ತಿತ್ತು‘ ಎಂದು ಬರೆದುಕೊಂಡಿದ್ದಾರೆ. </p>.‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.<p><strong>ಇದು ಸಿನಿಮಾನಾ ಅಥವಾ ಕೈಪಿಡಿಯಾ? </strong></p><p>‘ಇದು ಕೇವಲ ಒಂದು ಸಿನಿಮಾ ಅಲ್ಲ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವನ್ನಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿ. ಈ ಚಿತ್ರದ ಒಂದೊಂದು ‘ದೃಶ್ಯವು ಕೈಪಿಡಿ’ ಇದ್ದಂತಿದೆ. ಇಂತಹ ಒಂದು ಕೈಪಿಡಿ ನಿಜಕ್ಕೂ ಈ ಚಿತ್ರಕ್ಕೆ ಬೇಕಿರಲಿಲ್ಲ. ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಜೊತೆಯೇ ಪೈಪೋಟಿಗಿಳಿದಂತಿದೆ. ‘ಮುಂದಿನ ದೃಶ್ಯವನ್ನು ಇನ್ನು ಎಷ್ಟು ಹಿಂಸಾತ್ಮಕವಾಗಿ ಮಾಡಬಹುದು? ಎಂದು ಅವರು ಯೋಚಿಸುತ್ತಾ ಹೋದಂತೆ ಈ ಚಿತ್ರವು ಅತಿರೇಕಕ್ಕೆ ಹೋಗಿದೆ. ಅದು ಎಷ್ಟರಮಟ್ಟಿಗೆ ಅಂದರೆ.. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ’ ಎಂದಿದ್ದಾರೆ.</p><p>‘ಈ ಚಿತ್ರದ ಇನ್ನೊಂದು ವಿಶೇಷ.<strong> </strong>ಒಬ್ಬ ಮನುಷ್ಯನ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದರೂ, ಆತ ಎದ್ದು ನಿಂತು ಅರಾಮವಾಗಿ ಡೈಲಾಗ್ ಹೊಡೆಯುತ್ತಾನೆ’ ಎಂದರೆ ಇದಕ್ಕಿಂತ ಉತ್ತಮ ಹಾಸ್ಯ ದೃಶ್ಯ ಇನ್ನೊಂದು ಇರಲು ಸಾಧ್ಯವಿಲ್ಲ.</p><p>ಒಟ್ಟಿನಲ್ಲಿ ‘ಧುರಂಧರ್ 2’ ತುಂಬಾ ನಿರಾಸೆ ಮೂಡಿಸಿದೆ. ‘ರಣವೀರ್, ನೀವು ಇದಕ್ಕಿಂತ ಉತ್ತಮವಾದ ಕೆಲಸ ಮಾಡಬಲ್ಲಿರಿ‘. ಆದಿತ್ಯ ಧರ್ ಅವರೇ, ಈ ಅತಿರೇಕದ ದೇಶಪ್ರೇಮ ಮತ್ತು ಪ್ರಚಾರದ ಕಥೆಗಳು ಈಗ ಹಳೆಯದಾಗಿವೆ. ಇದರಿಂದ ಹೊರಬನ್ನಿ‘ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>