ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಣ್ಣೆ ಪಾರ್ಟಿಯಲ್ಲಿ ದಿಗಂತ್‌ ಹೇಳಿದ್ದು ‘ಹುಟ್ಟುಹಬ್ಬದ ಶುಭಾಶಯಗಳು’

Last Updated 10 ಡಿಸೆಂಬರ್ 2021, 13:53 IST
ಅಕ್ಷರ ಗಾತ್ರ

‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ ನಟ ದಿಗಂತ್‌. ಹೊಸ ಚಿತ್ರವೊಂದು ಸದ್ದಿಲ್ಲದೇ ನಿರ್ಮಾಣ ಮುಗಿಸಿ ಡಿಸೆಂಬರ್ 31ಕ್ಕೆ ಬಿಡುಗಡೆ ಆಗಲಿದೆ.

ಚಿತ್ರಕ್ಕೆ ಯೋಗರಾಜ್‌ ಭಟ್‌ ಅವರು ಎಣ್ಣೆ ಪಾರ್ಟಿಯ ಹಾಡೊಂದನ್ನು ಬರೆದು ಕಲಾವಿದರನ್ನು ಕುಣಿಸಿದ್ದಾರೆ. ಹಾಡು ಶುಕ್ರವಾರ ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

ಅಂದಹಾಗೆ, ‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’ ದಿಗಂತ್‌ ಅವರ ಚಿತ್ರಕ್ಕೆ ಭಟ್ಟರು ಹಾಡು ಬರೆದಿದ್ದಾರೆ.

ಚಿತ್ರಕ್ಕೆ ನಾಗರಾಜ್ ಬೇತೂರು ನಿರ್ದೇಶನವಿದೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT