ಹೀಗೆಂದು ಪ್ರಶ್ನಿಸಿದ್ದು ಶಿವರಾಜ್ಕುಮಾರ್. ಅಂದಹಾಗೆ ಈ ಪ್ರಶ್ನೆ ಕೇಳಿದ್ದು ಗರುಡಗಮನ ವೃಷಭವಾಹನದ ‘ಶಿವ’ನಿಗೆ. ಚಿತ್ರದ ನಾಯಕ ರಾಜ್ ಬಿ. ಶೆಟ್ಟಿ ಅವರಿಗೆ. ಭಜರಂಗಿ – 2 ಚಿತ್ರವು ‘ಝೀ 5’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಗರುಡಗಮನ ವೃಷಭ ವಾಹನವೂ ಅದೇ ವೇದಿಕೆಯಲ್ಲಿ ಜ. 13ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಶಿವರಾಜ್ಕುಮಾರ್ ರಾಜ್ ಬಿ. ಶೆಟ್ಟಿ ಅವರಿಗೆ ಕರೆ ಮಾಡಿ ಶುಭಹಾರೈಸಿದ್ದಾರೆ.