‘ದ್ರೋಣ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಪ್ರಮೋದ್ ಚಕ್ರವರ್ತಿ. ಚಿತ್ರದಲ್ಲಿ ಶಿವರಾಜ್ಕುಮಾರ್ ಅವರದು ಶಿಕ್ಷಕನ ಪಾತ್ರ. ಅವರ ಅಭಿಮಾನಿಗಳಿಗೆ ಇಷ್ಟವಾಗುವ ಕಮರ್ಷಿಯಲ್ ಅಂಶಗಳ ಮೇಲೆಯೇ ಸಿನಿಮಾ ಕಟ್ಟಲಾಗಿದೆಯಂತೆ. ಅವರು ಬೋಧನೆಗಷ್ಟೇ ಸೀಮಿತಗೊಂಡಿಲ್ಲ. ಹಾಸ್ಯ, ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಕೂಡ ಇದೆ ಎನ್ನುವುದು ಚಿತ್ರತಂಡದ ವಿವರಣೆ. ಪ್ರತಿದಿನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಶಾಲೆಗಳ ಕಣ್ಣೀರ ಕಥೆಗಳು ಪ್ರಕಟಗೊಳ್ಳುತ್ತವೆ. ಆದರೆ, ರೆಗ್ಯುಲರ್ ಫಾರ್ಮೆಟ್ನಿಂದ ಹೊರತಾದ ಚಿತ್ರ ಇದು. ಜನರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಂಬೋಣ.