ಆದರೂ, ತಮ್ಮ ಸಿನಿಮಾ ಬಗ್ಗೆ ವಿಶ್ವಾಸ ಇರುವುದು ಅವರ ಮಾತಿನಲ್ಲಿ ಕಾಣಿಸುತ್ತಿತ್ತು. ‘ಒಳ್ಳೆಯ ಹೂರಣದ ಸಿನಿಮಾಗಳನ್ನು ಕನ್ನಡದ ಜನ ಯಾವತ್ತೂ ಕೈಬಿಟ್ಟಿಲ್ಲ. ಬಾಹುಬಲಿಯಂತಹ ಅದ್ದೂರಿ ಚಿತ್ರ ತೆರೆಯ ಮೇಲಿದ್ದ ಸಮಯದಲ್ಲೇ, ರಂಗಿತರಂಗ ಸಿನಿಮಾವನ್ನು ಜನ ಗೆಲ್ಲಿಸಿದ್ದಾರೆ. ನಮ್ಮದು ಕೂಡ ಒಳ್ಳೆಯ ಹೂರಣ ಇರುವ ಚಿತ್ರ’ ಎಂದರು ಭಟ್.