ನಟ ರವಿಶಂಕರ್ ಗೌಡ ಬಂಗಲೆಯಲ್ಲಿ ದೆವ್ವದಿಂದ ಹೆದರಿದ ಅನುಭವ ಬಿಚ್ಚಿಟ್ಟರು. ‘ದೊಡ್ಡದಾದ ಆ ಬಂಗಲೆಯಲ್ಲಿ ಗಾಢವಾದ ಕತ್ತಲು ಆವರಿಸಿತ್ತು. ಬಾಗಿಲಿನಿಂದ ನಡೆದುಕೊಂಡು ಬಂದು ಸಿಗರೇಟ್ ಲೈಟರ್ ಹಚ್ಚುವ ದೃಶ್ಯವದು. ನಾನು ಆ ಲೈಟರ್ನಿಂದ ಹೊತ್ತುವ ಬೆಳಕನ್ನು ಮಾತ್ರವೇ ಶೂಟ್ ಮಾಡುವುದಾಗಿ ನಾಗಣ್ಣ ಹೇಳಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಆಗ ನನ್ನ ಎದುರಿಗೆ ಕಂಡ ದೆವ್ವದ ಪ್ರತಿರೂಪ ನೋಡಿ ಬೆವತು ಹೋದೆ’ ಎಂದರು.