ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪ್ರಕಾಶ್‌ ರಾಜ್‌ಗೆ ಕಾರ್ನಾಡರು ಬರೆದ ಅಪರೂಪದ ಪತ್ರ

Last Updated 10 ಜೂನ್ 2019, 8:37 IST
ಅಕ್ಷರ ಗಾತ್ರ

‘ಕನ್ನಡವನ್ನು... ಕನ್ನಡಿಗರನ್ನು... ಕರ್ನಾಟಕವನ್ನು... ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ’ ಎಂದು ನಟ ಪ್ರಕಾಶ್‌ ರಾಜ್‌ ಟ್ವಿಟರ್‌ನಲ್ಲಿ ಕಾರ್ನಾಡರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಜೊತೆಗೆ, ಅವರಿಗೆ ಐವತ್ತು ವರ್ಷ ತುಂಬಿದ ವೇಳೆ ಬರೆದ ಪತ್ರವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

‘ನಿಮಗೆ ಐವತ್ತು ತುಂಬಿತೇ? ನಂಬಲಾಗುವುದಿಲ್ಲ. ಐವತ್ತು ತಲುಪುವುದೇನು ಕಠಿಣ ಮಾತಲ್ಲ, ನಿಜ. ಆರೋಗ್ಯವಾಗಿದ್ದರೆ ಯಾರಾದರೂ ಈ ಅಂಕಿ ಮುಟ್ಟಬಹುದು. ಆದರೆ ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೆಲ್ಲ ಯಶಸ್ಸನ್ನು, ಪ್ರತಿಭೆಯನು ತುಂಬಿದ್ದೀರಿ! ನೀವು ದಿನೇ ದಿನೇ ಬೆಳೆಯುತ್ತಾ, ಭಾರತದುದ್ದಕ್ಕೂ ರೆಂಬೆ ಕೊಂಬೆಗಳನ್ನು ಚಾಚುತ್ತಿರುವುವನ್ನು ನಿಮ್ಮ ಮಿತ್ರರಾದ ನಾನು ದೂರದಿಂದ, ಸಮಾಜದಿಂದ ನೋಡಿ ನಲಿದಿದ್ದೇನೆ, ಹೆಮ್ಮೆಯಿಂದ ಬೀಗಿದ್ದೇನೆ. ಹೀಗೆಯೇ ಉತ್ತರೋತ್ತರ ಬೆಳೆಯುತ್ತೀರಿ ಬೆಳಗುತ್ತಿರಿ ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ’

ನಿಮ್ಮ ಗಿರೀಶ ಕಾರ್ನಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT