ನಟ ಗಣೇಶ್ ನಾಯಕ ನಟನಾಗಿ ನಟಿಸುತ್ತಿರುವ ‘ವೇರ್ ಈಸ್ ಮೈ ಕನ್ನಡಕ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಪಂಚಮುಖಿ ದೇವಸ್ಥಾನದಲ್ಲಿ ನಡೆಯಿತು.
ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ರಾಜ್ ಹಾಗೂ ಧಾಮಿನಿ ಈ ಚಿತ್ರ ನಿರ್ದೇರ್ಶಿಸುತ್ತಿದ್ದಾರೆ. ಗಣೇಶ್ ಅವರೊಂದಿಗೆ ಪತ್ರಲೇಖ ಹಾಗೂ ಅರ್ಬಾಜ್ ಖಾನ್ ನಟಿಸುತ್ತಿದ್ದಾರೆ. ಏಪ್ರಿಲ್ನಿಂದ ಶೂಟಿಂಗ್ ಆರಂಭವಾಗಲಿದೆ.
ಚಂದನವನದ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರಗೊಂಡಿರುವುದಕ್ಕೆ ಖುಷಿಯಾಗಿರುವ ನಿರ್ದೇಶಕ ಜೋಡಿರಾಜ್ ಹಾಗೂ ಧಾಮಿನಿ, ‘ಈ ಚಿತ್ರದಲ್ಲಿ ಕನ್ನಡ ಹಾಗೂ ಹಿಂದಿ ಕಲಾವಿದರ ಸಂಗಮವಾಗುತ್ತಿದೆ’ ಎನ್ನುತ್ತಾರೆ.
ತಮ್ಮ ಚೊಚ್ಚಲ ಕನ್ನಡ ಚಿತ್ರಕ್ಕೆ ವಿಭಿನ್ನ ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆಯುವುದು ಲಂಡನ್ನಲ್ಲಿ. ಚಿತ್ರದ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ.v