ಚಾಮರಾಜನಗರ ಬಳಿಯ ತಮಿಳುನಾಡಿಗೆ ಸೇರಿರುವ ತಾಳವಾಡಿ ಮತ್ತು ಡಾ.ರಾಜ್ಕುಮಾರ್ ಅವರ ಹುಟ್ಟೂರಾದ ಗಾಜನೂರಿನ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಗಡಿಭಾಗದ ಜನರಲ್ಲಿನ ಪರಸ್ಪರ ಭಾಷಾ ಬಾಂಧವ್ಯ ಹಾಗೂ ಭಾವನಾತ್ಮಕ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ತಯಾರಾದ ಈ ಸಿನಿಮಾದಲ್ಲಿ ಎಚ್.ಜಿ.ದತ್ತಾತ್ರೇಯ, ನೀನಾಸಂ ಅಶ್ವಥ್, ಮುನಿ, ಪ್ರಿಯ ಕೆಸರೆ, ನಿರಂಜನ್ ಕುಮಾರ್, ಪೃಥ್ವಿ, ರಾಧಾಶ್ರೀ ಮುಂತಾದವರು ಅಭಿನಯಿಸಿದ್ದಾರೆ. ಸದ್ಯದಲ್ಲಿ ಈ ಚಿತ್ರ ತೆರೆಗೆ ಬರಲಿದೆ.