ಬೆಂಗಳೂರು: ಪಾರ್ಟಿಯಲ್ಲಿ ಡಿ.ಜೆ ಆಗಿ ಪಾಲ್ಗೊಂಡು ಡ್ರಗ್ಸ್ ಸೇವಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಬಾಲಿವುಡ್ ನಟ ಶಕ್ತಿ ಕಪೂರ್ ಮಗ ಸಿದ್ದಾಂತ್ ಅವರು ಡ್ರಗ್ಸ್ ಸೇವನೆ ಕುರಿತಂತೆ ಹೇಳಿಕೆ ನೀಡಿದ್ದಾರೆ.
ನಾನು ಡ್ರಗ್ಸ್ ಸೇವನೆ ಮಾಡಿಲ್ಲ, ಪಾರ್ಟಿಯಲ್ಲಿ ಗೆಳೆಯರು ಡ್ರಿಂಕ್ಸ್ನಲ್ಲಿ ಡ್ರಗ್ಸ್ ಸೇರಿಸಿ ಕೊಟ್ಟಿದ್ದರು. ಅದನ್ನು ನಾನು ಸೇವಿಸಿದ್ದೆ ಎಂದು ಸಿದ್ಧಾಂತ್ ಹೇಳಿಕೆ ನೀಡಿದ್ದಾರೆ. ಅವರು ಇಂಡಿಯಾ.ಕಾಮ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಿದ್ಧಾಂತ್ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ತನಿಖಾ ಅಧಿಕಾರಿಗಳ ಮುಂದೆ ಅವರು ‘ನಾನು ಡ್ರಗ್ಸ್ ಸೇವಿಸಿರಲಿಲ್ಲ, ಪಾರ್ಟಿಯಲ್ಲಿ ಗೆಳೆಯರು ಡ್ರಿಂಕ್ಸ್ನಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಕೊಟ್ಟಿದ್ದರು‘ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಸಿದ್ದಾಂತ್ಅವರನ್ನು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಈ ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟ್ರಿನಿಟಿ ವೃತ್ತದಲ್ಲಿರುವ ದಿ ಪಾರ್ಕ್ ಪಂಚತಾರಾ ಹೋಟೆಲ್ನ ಬಾರ್ನಲ್ಲಿ ಕಳೆದ ಭಾನುವಾರ ರಾತ್ರಿ ಡ್ರಗ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಹಲಸೂರು ಠಾಣೆ ಪೊಲೀಸರು, ಹೋಟೆಲ್ ಮೇಲೆ ದಾಳಿ ಮಾಡಿದ್ದರು.
ಡ್ರಗ್ಸ್ ಸೇವಿಸಿದ್ದ ಆರೋಪದಡಿ ಸಿದ್ದಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದರು. ಎಲ್ಲರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.