ಮರಾಠಿ ನಟ ಜಿತೇಂದ್ರ ಭೀಕುಲಾಲ್ ಜೋಶಿ ಅವರಿಗೆ ಅತ್ಯುತ್ತಮ ನಟಗೆ ನೀಡುವ ‘ರಜತ ಮಯೂರ’ ಲಭಿಸಿದೆ. ‘ಗೋದಾವರಿ’ ಎಂಬ ಚಿತ್ರದಲ್ಲಿ ದಿವಂಗತ ನಿರ್ಮಾಪಕ ಹಾಗೂ ನಟ ನಿಶಿಕಾಂತ್ ಕಾಮತ್ ಪಾತ್ರಕ್ಕೆ ಜೀವ ತುಂಬಿದ್ದಕ್ಕಾಗಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರ ನಿರ್ದೇಶಿಸಿದ ನಿಖಿಲ್ ಮಹಾಜನ್ ಅವರು ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ಗೆ ಭಾಜನರಾಗಿದ್ದು, ‘ರಜತ ಮಯೂರ’ ಲಭಿಸಿದೆ.