‘ಬೆಲ್ ಬಾಟಂ’ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರನ ಕಥೆ ಹೇಳಿದ್ದ ನಿರ್ದೇಶಕ ಜಯತೀರ್ಥ ‘ಬನಾರಸ್’ ಮೂಲಕ ಕಾಶಿಯ ಹೂಕುಂಡದಲ್ಲಿ ಪ್ರೀತಿ ಅರಳಿಸಲು ಅಣಿಯಾಗಿದ್ದಾರೆ. ಕಾಶಿ ಯಾತ್ರೆಯ ಕ್ಯಾನ್ವಾಸ್ನಲ್ಲಿ ಸಂಗೀತ, ಬಣ್ಣ, ಕಥೆಗಳೊಟ್ಟಿಗೆ ಪಾತ್ರಗಳನ್ನು ಜೋಡಿಸಿಟ್ಟಿದ್ದಾರಂತೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.