ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಡಿ.ಕೆ. ರಾಮಕೃಷ್ಣ (ಪ್ರವೀಣ್ ಕುಮಾರ್) ಅವರು ಆಯ್ಕೆಯಾಗಿದ್ದಾರೆ. ಎಂ.ಜಿ. ರಾಮಮೂರ್ತಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆ. ಮಂಜು ಕಾರ್ಯದರ್ಶಿಯಾಗಿ, ರಮೇಶ್ ಯಾದವ್ ಜಂಟಿ ಕಾರ್ಯದರ್ಶಿಯಾಗಿ, ಆರ್.ಎಸ್. ಗೌಡ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಚುನಾವಣೆ ನಡೆದಿತ್ತು.
2011ರ ನಂತರ ಸಂಘಕ್ಕೆ ಚುನಾವಣೆ ನಡೆದಿರಲಿಲ್ಲ. 2011ರಿಂದಲೂ ಮುನಿರತ್ನ ಅವರೇ ಅಧ್ಯಕ್ಷರಾಗಿದ್ದರು. ಸಂಘಕ್ಕೆ ಚುನಾವಣೆ ನಡೆಸುವಂತೆ ಆದೇಶಿಸಬೇಕು ಎಂದು ಕೋರಿ ನಿರ್ಮಾಪಕ ಬಸಂತ ಕುಮಾರ ಪಾಟೀಲ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ‘ಹೈಕೋರ್ಟ್ ಆದೇಶದ ಪರಿಣಾಮವಾಗಿ ಈ ಚುನಾವಣೆ ನಡೆದಿದೆ’ ಎಂದು ನಿರ್ಮಾಪಕ ಬಾ.ಮ. ಹರೀಶ್ ತಿಳಿಸಿದರು.