ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಮನುಷ್ಯ ಹೊಟ್ಟೆಗಾಗಿ ಹಾಕುವ ವೇಷಗಳು, ತಾಳುವ ಅವತಾರಗಳೇ ಈ ಚಿತ್ರದ ಕಥೆ’ ಎಂದರು ನಿರ್ದೇಶಕ ಎನ್. ರವಿಕಿರಣ್. ‘ಇದು ಮಾಸ್ ಅಂಶಗಳು ಇರುವ ಕಮರ್ಷಿಯಲ್ ಚಿತ್ರ. ಆದರೆ, ಈ ಚಿತ್ರಕ್ಕೆ ಒಂದು ಸಾಮಾಜಿಕ ಜವಾಬ್ದಾರಿ ಕೂಡ ಇದೆ. ಸಾಮಾನ್ಯ ವೀಕ್ಷಕರಿಗೆ ತಟ್ಟುವಂತೆ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ಈ ಸಿನಿಮಾದಲ್ಲಿ ಅಳವಡಿಸಿದ್ದೇವೆ’ ಎಂದರು ರವಿಕಿರಣ್.