‘ಜಾಸ್ತಿ ಪ್ರೀತಿ ಎನ್ನುವ ಸಿನಿಮಾ ನಿರ್ದೇಶನವನ್ನುಹಿಂದೆ ಆರಂಭಿಸಿದ್ದೆ. ಅದು ಪೂರ್ಣಗೊಳ್ಳುವ ಹಂತದ ಸಮೀಪ ಬಂದಿದೆ’ ಎನ್ನುತ್ತ ಮಾತು ಆರಂಭಿಸಿದ ಕ್ರಿಷ್, ‘ಕಪಟ ನಾಟಕ ಸೂತ್ರಧಾರಿ ಚಿತ್ರದ ಕಥೆಯನ್ನು ನನ್ನ ಸ್ನೇಹಿತರ ಜೊತೆ ಚರ್ಚಿಸಿದ್ದೆ. ಅವರು ಕಥೆ ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿದರು. ನನ್ನ ಸಿನಿಮಾ ನಾಯಕ ಯಾರಾಗಬೇಕು ಎಂಬ ಆಲೋಚನೆಯಲ್ಲಿ ಇದ್ದಾಗ ಹುಲಿರಾಯ ಸಿನಿಮಾ ಟ್ರೇಲರ್ ಬಿಡುಗಡೆ ಆಯಿತು. ಅಲ್ಲಿ ಬಾಲು ನಾಗೇಂದ್ರ ಅವರ ಧ್ವನಿ ಕೇಳಿ, ನನ್ನ ಸಿನಿಮಾಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿದೆ’ ಎಂದು ಎರಡು ವರ್ಷಗಳ ಹಿಂದಿನ ಕಥೆ ಹೇಳಿದರು.