ಭಗವದ್ಗೀತೆಯ ಮಾತು ‘ಕರ್ಮಣ್ಯೇವಾಧಿಕಾರಸ್ತೆ’ ಇಲ್ಲಿ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಸೆ. 24ರಂದು ಚಿತ್ರ ತೆರೆಗೆ ಬರಲಿದೆ. ಟ್ರೇಲರ್ ಶೀಘ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಕೊಲೆ ರಹಸ್ಯ ಬೇಧಿಸುವ ಕಥಾಹಂದರ ಹೊಂದಿದೆ ಈ ಚಿತ್ರ. ಚಿತ್ರವನ್ನು ಶ್ರೀಹರಿ ಆನಂದ್ ನಿರ್ದೇಶಿಸಿದ್ದಾರೆ. 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಬೆಂಗಳೂರು, ಆಗುಂಬೆ, ತೀರ್ಥಹಳ್ಳಿ, ದಾಂಡೇಲಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಅಮೇರಿಕಾದಲ್ಲಿ ವೈದ್ಯರಾಗಿರುವ ರಮೇಶ್ ರಾಮಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಎರಡು ಹಾಡುಗಳಿವೆ. ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ. ಸಂಜಿತ್ ಹೆಗ್ಡೆ, ಅಶ್ವಿನಿ, ರಿತ್ವಿಕ್ ಮುರಳೀಧರ್, ಅನನ್ಯಾ ಭಟ್ ಹಾಡಿದ್ದಾರೆ. ಮೂರು ಸಾಹಸ ಸನ್ನಿವೇಶಗಳಿಗೆ ಮಾಸ್ ಅಶೋಕ್ ಸಾಹಸ ನಿರ್ದೇಶನ ಮಾಡಿದ್ದಾರೆ.
ಉದಯಲೀಲಾ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ.
ಪ್ರತೀಕ್ ಸುಬ್ರಮಣಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ದಿವ್ಯ ಹಾಗೂ ನೇಪಾಳದ ಡೋಲ್ಮ ನಾಯಕಿಯರು. ನಾಟ್ಯ ರಂಗ, ಉಗ್ರಂ ಮಂಜು, ನಟನ ಪ್ರಶಾಂತ್ ತಾರಾಗಣದಲ್ಲಿದ್ದಾರೆ.