<p>ಬೆಂಗಳೂರು: ‘ಕರ್ನಾಟಕ ರತ್ನ ಸೇರಿದಂತೆ ಬಾಕಿ ಉಳಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಜೂನ್ನಲ್ಲಿ ಪ್ರದಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.</p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ‘ಚಂದನವನ ಅಂದು, ಇಂದು, ಮುಂದು’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಸಿನಿಮಾಗಳು ಭಾಷೆ, ರೈತ, ಕಾರ್ಮಿಕ ಚಳವಳಿಗೆ ವೇದಿಕೆಯಾಗಿದ್ದವು. ಕೇವಲ ಮನರಂಜನೆಗೆ ಸರಕಾಗದೆ ಬದುಕಿನ ಪ್ರತಿಬಿಂಬವಾಗಿದ್ದವು. ಇಂದು ಸಿನಿಮಾದವರು ಎಷ್ಟು ಗಳಿಕೆ ಮಾಡಿದ್ದೇವೆ ಎನ್ನುವುದಕ್ಕಿಂತ, ಎಷ್ಟು ಪ್ರೇಕ್ಷಕರನ್ನು ತಲುಪಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ಚಿತ್ರರಂಗ ಪ್ರೇಕ್ಷಕರನ್ನು ಗೌರವಿಸಬೇಕು. ಅವರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಮಾಡಬೇಕು. ಕನ್ನಡ ಚಿತ್ರರಂಗ ಸಾಧ್ಯತೆಯನ್ನು ವಿಸ್ತರಿಸಿದೆ. ‘ಕೆಜಿಎಫ್’ ‘ಕಾಂತಾರ’ದಂತಹ ಸಿನಿಮಾಗಳು ಕನ್ನಡವನ್ನು ವಿಶ್ವಮಟ್ಟಕ್ಕೆ ತಲುಪಿಸಿವೆ. ಅದು ಇಂದಿನ ಗೆಲುವು. ಈ ಗೆಲುವಿನ ಜತೆಗೆ ಕೆಲವು ಸಮಸ್ಯೆಗಳೂ ಶುರುವಾಗಿವೆ. ಅವುಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಸಬ್ಸಿಡಿ ಹೆಚ್ಚಳ, ಸಿನಿಮಾ ಕಲಾವಿದರಿಗೆ ವಸತಿ ಯೋಜನೆ, ಕನ್ನಡಕ್ಕೆ ಪ್ರತ್ಯೇಕ ಒಟಿಟಿ ಸೇರಿ ಒಟ್ಟು ಏಳು ಅಂಶಗಳುಳ್ಳ ಮನವಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದ ಸಮಿತಿ ಕೆ.ವಿ.ಪ್ರಭಾಕರ್ಗೆ ಅವರಿಗೆ ಸಲ್ಲಿಸಿತು.</p>.<p>ಬಳಿಕ ನಿರ್ದೇಶಕ ಪಿ.ಶೇಷಾದ್ರಿ ನೇತೃತ್ವದಲ್ಲಿ ಚಲನಚಿತ್ರರಂಗದ ಪ್ರಸ್ತುತ ಸ್ಥಿತಿಗತಿ ಕುರಿತ ವಿಚಾರಗೋಷ್ಠಿ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-4-948150211</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಕರ್ನಾಟಕ ರತ್ನ ಸೇರಿದಂತೆ ಬಾಕಿ ಉಳಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಜೂನ್ನಲ್ಲಿ ಪ್ರದಾನ ಮಾಡಲಾಗುವುದು’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.</p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ‘ಚಂದನವನ ಅಂದು, ಇಂದು, ಮುಂದು’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಸಿನಿಮಾಗಳು ಭಾಷೆ, ರೈತ, ಕಾರ್ಮಿಕ ಚಳವಳಿಗೆ ವೇದಿಕೆಯಾಗಿದ್ದವು. ಕೇವಲ ಮನರಂಜನೆಗೆ ಸರಕಾಗದೆ ಬದುಕಿನ ಪ್ರತಿಬಿಂಬವಾಗಿದ್ದವು. ಇಂದು ಸಿನಿಮಾದವರು ಎಷ್ಟು ಗಳಿಕೆ ಮಾಡಿದ್ದೇವೆ ಎನ್ನುವುದಕ್ಕಿಂತ, ಎಷ್ಟು ಪ್ರೇಕ್ಷಕರನ್ನು ತಲುಪಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ಚಿತ್ರರಂಗ ಪ್ರೇಕ್ಷಕರನ್ನು ಗೌರವಿಸಬೇಕು. ಅವರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಮಾಡಬೇಕು. ಕನ್ನಡ ಚಿತ್ರರಂಗ ಸಾಧ್ಯತೆಯನ್ನು ವಿಸ್ತರಿಸಿದೆ. ‘ಕೆಜಿಎಫ್’ ‘ಕಾಂತಾರ’ದಂತಹ ಸಿನಿಮಾಗಳು ಕನ್ನಡವನ್ನು ವಿಶ್ವಮಟ್ಟಕ್ಕೆ ತಲುಪಿಸಿವೆ. ಅದು ಇಂದಿನ ಗೆಲುವು. ಈ ಗೆಲುವಿನ ಜತೆಗೆ ಕೆಲವು ಸಮಸ್ಯೆಗಳೂ ಶುರುವಾಗಿವೆ. ಅವುಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಸಬ್ಸಿಡಿ ಹೆಚ್ಚಳ, ಸಿನಿಮಾ ಕಲಾವಿದರಿಗೆ ವಸತಿ ಯೋಜನೆ, ಕನ್ನಡಕ್ಕೆ ಪ್ರತ್ಯೇಕ ಒಟಿಟಿ ಸೇರಿ ಒಟ್ಟು ಏಳು ಅಂಶಗಳುಳ್ಳ ಮನವಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದ ಸಮಿತಿ ಕೆ.ವಿ.ಪ್ರಭಾಕರ್ಗೆ ಅವರಿಗೆ ಸಲ್ಲಿಸಿತು.</p>.<p>ಬಳಿಕ ನಿರ್ದೇಶಕ ಪಿ.ಶೇಷಾದ್ರಿ ನೇತೃತ್ವದಲ್ಲಿ ಚಲನಚಿತ್ರರಂಗದ ಪ್ರಸ್ತುತ ಸ್ಥಿತಿಗತಿ ಕುರಿತ ವಿಚಾರಗೋಷ್ಠಿ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-4-948150211</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>