ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮತ್ತು ಎಸ್.ಆರ್.ಜೆ. ನಿರ್ಮಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ಕಾಸುರ’ ಚಿತ್ರದ ಚಿತ್ರೀಕರಣವು ಬಹುತೇಕ ಪೂರ್ಣಗೊಂಡಿದೆ.
40 ದಿವಸಗಳ ಕಾಲ ಬೆಂಗಳೂರು ಸುತ್ತಮುತ್ತ ಹಾಗೂ ಚೆನ್ನೈನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಗೀತೆಯ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
‘ಕಾಸುರ’ಕ್ಕೆ ವಿನೋದ್ ಸಂಭಾಷಣೆ, ಪರಂಧಾಗನ್ ಛಾಯಾಗ್ರಹಣ, ಅಪ್ಪು ಸಾಹಿತ್ಯ, ಪ್ರಣವ್ ಗಿರಿಧರನ್ ಸಂಗೀತ ಇದೆ. ಶ್ರೀ ಅವರೇ ಚಿತ್ರಕಥೆ ಬರೆದಿರುವ ‘ಕಾಸುರ’ನಿಗೆ ಜಿತ್ತ ಮೋಹನ್ ಚಿತ್ರಕ್ಎಕ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತಾರಾಗಣದಲ್ಲಿ ಶ್ರೀ, ಅಂಗನಾ ಆರ್ಯ, ಕವಿತಾ ರಾಧಾಶ್ಯಾಂ, ಅವಿನಾಶ್, ಶ್ರೀನಿವಾಸನ್, ಕೃಪಾ ಇದ್ದಾರೆ.