ಮುಂಬೈ: ಬಾಲಿವುಡ್ನಲ್ಲಿ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು ಹಾಡಿದ ಕೊನೆಯ ಹಾಡು ಮಂಗಳವಾರಬಿಡುಗಡೆಯಾಗಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಕೆಕೆ ಅವರು ಕೋಲ್ಕತ್ತದಲ್ಲಿ ಕಾರ್ಯಕ್ರಮ ನೀಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ನಿಧನರಾದರು. ಸದಾ ಗುನುಗುವಂತಿರುವ‘ಧೂಪ್ ಪಾನಿ ಬಹ್ನೆ ದೇ‘ ಹಾಡು ಕೇಳಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
‘ಶೆರ್ಡಿಲ್‘ ಸಿನಿಮಾದ‘ಧೂಪ್ ಪಾನಿ ಬಹ್ನೆ ದೇ‘ ಹಾಡಿಗೆ ಕೆಕೆ ಧ್ವನಿಯಾಗಿದ್ದಾರೆ. ಗುಲ್ಜಾರ್ ಬರೆದಿರುವ ಹಾಡಿಗೆ ಶಂತನು ಮೊಯಿತ್ರಾ ಸಂಗೀತ ನೀಡಿದ್ದಾರೆ. ಟೀ–ಸಿರಿಸ್ ಸಂಸ್ಥೆ ಈ ಹಾಡನ್ನು ಬಿಡುಗಡೆ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಾಡಿನ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಕೆ ಅಭಿಮಾನಿಗಳು ಹಾಡು ಕೇಳಿ ಭಾವುಕರಾಗಿದ್ದುಅವರ ಬಗೆಗಿನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೆಕೆ ಭಾರತ ಕಂಡ ಅದ್ಭುತಗಾಯಕ, ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಕೆಕೆ ಅವರ ಕೊನೆ ಹಾಡು ಕೇಳಿ ಬೇಸರವಾಯಿತು ಎಂದು ಸಾವಿರಾರುಅಭಿಮಾನಿಗಳು ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.