ಒಮ್ಮೆ ನಿರ್ದೇಶಕರು ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರಂತೆ. ಯಾತ್ರೆಯ ವೇಳೆಯಲ್ಲಿ, ರಸ್ತೆ ಬದಿ ಸುಸ್ತಾಗಿ ಕುಳಿತಿದ್ದ ಮಹದೇಶ್ವರನ ಭಕ್ತರು ಕಂಡರಂತೆ. ಅವರಲ್ಲಿ ‘ಏಕೆ ಕುಳಿತಿದ್ದೀರಿ’ ಎಂದು ಪ್ರಶ್ನಿಸಿದಾಗ, ‘ಸುಸ್ತಾಗಿದೆ’ ಎಂಬ ಉತ್ತರ ಸಿಕ್ಕಿತಂತೆ. ಆಗ ನಿರ್ದೇಶಕರು, ‘ಮಾದೇಶ್ವರನನ್ನು ಕೂಗಿ ಕರೆಯಿರಿ’ ಎಂದು ಅವರಲ್ಲಿ ಹೇಳಿದರು. ಅದೇ ಮಾತು ಈ ಚಿತ್ರದ ಶೀರ್ಷಿಕೆಗೆ ಸ್ಫೂರ್ತಿ ಆಯಿತು.