ರಾಜ್ಯ ಸರ್ಕಾರ ಕೋವಿಡ್ ಲಾಕ್ಡೌನ್ ಅನ್ನು ಸಡಿಲಿಸಿ, ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಿಸಲು ಒಪ್ಪಿಗೆ ನೀಡಿದರೂ ಚಿತ್ರಮಂದಿರಗಳು ಇನ್ನೂ ಕಳೆಗಟ್ಟಿಲ್ಲ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ.50 ನಿರ್ಬಂಧಿಸಿರುವುದು ಚಿತ್ರರಂಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಸಂಕಷ್ಟದ ನಡುವೆಯೇ ಲಾಕ್ಡೌನ್ಗೆ ಮುಂಚೆ ಬಿಡುಗಡೆಯಾಗಿದ್ದ ನಟಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಮತ್ತೆ ಮರುಬಿಡುಗಡೆಗೆ ಸಜ್ಜಾಗಿದೆ.