ಎಐಎಡಿಎಂಕೆ ಸಂಚಾಲಕ ಓ.ಪನೀರ್ಸೆಲ್ವಂ ಮತ್ತು ಸಹಸಂಚಾಲಕ ಕೆ.ಪಳನಿಸ್ವಾಮಿ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ‘ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡ, ಪಕ್ಷಕ್ಕೆ ಅಗೌರವ ತೋರಿದ ಕಾರಣಕ್ಕೆ 155 ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. 137 ಮಂದಿ ಕಾಂಚೀಪುರ ಜಿಲ್ಲೆಗೆ ಸೇರಿದವರಾಗಿದ್ದು, 18 ಮಂದಿ ಕೊಯಂಬತ್ತೂರ ನಗರ ಘಟಕಕ್ಕೆ ಸೇರಿದವರು’ ಎಂದು ತಿಳಿಸಲಾಗಿದೆ.