ಘಟಕದ ಉತ್ತರ ದಿಕ್ಕಿನಲ್ಲಿರುವ ಶಾದನಹಳ್ಳಿ, ನಾಗನಹಳ್ಳಿ, ದಕ್ಷಿಣಕ್ಕಿರುವ ಮೇಟಗಳ್ಳಿ, ಪೂರ್ವಕ್ಕಿರುವ ಬೆಲವತ್ತ ಹಾಗೂ ಪಶ್ಚಿಮ ದಿಕ್ಕಿನಲ್ಲಿರುವ ಮೇಟಗಳ್ಳಿ ಕೈಗಾರಿಕಾ ಪ್ರದೇಶದವರೆಗಿನ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಬೆಲವತ್ತ ಹಾಗೂ ಮೆಟಗಳ್ಳಿ ನಡುವೆ ಆರ್ಬಿಐ ಇದೆ. ಈ ಆವರಣದ ಮೂಲಕವೇ ಸಂಪರ್ಕ ಕಲ್ಪಿಸಿದ್ದ ರಸ್ತೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸಿಐಎಸ್ಎಫ್ ಸಿಬ್ಬಂದಿಯನ್ನು ಪಹರೆಗೆ ನಿಯೋಜಿಸಲಾಗಿದೆ.