‘ಕನಿಷ್ಠ ನಷ್ಟ ಅನುಭವಿಸಲು ತಯಾರಿದ್ದರೆ ಮಾತ್ರ ಸಿನಿಮಾ ಮಾಡಿ, ಹಣ ಗಳಿಸುವ ಏಕೈಕ ಉದ್ದೇಶದಿಂದ ಮಾತ್ರ ಸಿನಿಮಾ ಮಾಡಬೇಡಿ ಎಂದೇ ನಿರ್ಮಾಪಕರಿಗೆ ಹೇಳುತ್ತೇನೆ’ ಎಂದವರು ನಿರ್ದೇಶಕ ಎಂ.ಡಿ. ಕೌಶಿಕ್. ಅವರ ನಿರ್ದೇಶನದ ‘ಈಶ ಮಹೇಶ’ ಚಿತ್ರ ಈ ವಾರ ತೆರೆಕಾಣಲಿದ್ದು, ಈ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.