ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಸಂದೀಪ್ ನಿರ್ದೇಶಕಕ್ಕಿಳಿದಿದ್ದರು. ಆ ಚಿತ್ರವೂ ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿತ್ತು. ಅನಂತರ ಅದೇ ಚಿತ್ರವನ್ನು ಅವರು ಹಿಂದಿಯಲ್ಲಿ ‘ಕಬೀರ್ ಸಿಂಗ್’ ರಿಮೇಕ್ ಮಾಡಿದ್ದರು. ಆ ಚಿತ್ರವು ಹಿಟ್ ಆಗಿದೆ. ಇವರ ನಿರ್ದೇಶನದ ಎರಡೂ ಚಿತ್ರಗಳು ಭಾರಿ ಯಶಸ್ಸು ಗಳಿಸಿದ್ದರಿಂದ ಅವರ ಮುಂದಿನ ಚಿತ್ರದ ಬಗ್ಗೆ ಎಲ್ಲರ ದೃಷ್ಟಿ ಬಿದ್ದಿದೆ. ಈ ಚಿತ್ರದಲ್ಲಿ ಮಹೇಶ್ಬಾಬು ನಟಿಸಲಿದ್ದಾರೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.