ಈ ಕುರಿತು ಟ್ವೀಟ್ ಮಾಡಿರುವ ಅವರು, 'ಪುಷ್ಪದಲ್ಲಿ ಅಲ್ಲು ಅರ್ಜುನ್ ಪಾತ್ರವು ಬೆರಗುಗೊಳಿಸುತ್ತದೆ. ಅದು ನೈಜ ಮತ್ತು ಸಂವೇದನಾಶೀಲವಾಗಿದೆ. ತಮ್ಮ ಚಿತ್ರವು ಹಳ್ಳಿಗಾಡಿನ ವಾತಾವರಣ ಹಾಗೂ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ಎಂಬುದನ್ನು ನಿರ್ದೇಶಕ ಸುಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಹೊಗಳಿದ್ದಾರೆ.