‘ಕೊಳ್ಳೇಗಾಲ’ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದ ದೀಕ್ಷಿತ್ ವೆಂಕಟೇಶ್ ಈ ಚಿತ್ರದ ನಾಯಕ. ರೂಪಿಕಾ ನವ ವಧುವಿನ ಪಾತ್ರದಲ್ಲಿ ಕಾಣಿಸಿದ್ದಾರೆ. ಸಣ್ಣ ಪಾತ್ರವೊಂದರಲ್ಲಿ ಮಾನಸ ಗೌಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಮೇಶ್ ಭಟ್, ಸುಚೇಂದ್ರ ಪ್ರಸಾದ್, ಶಂಕರ ನಾರಾಯಣ, ಕುರಿ ಸುನಿಲ್, ಮಿಮಿಕ್ರಿ ದಯಾನಂದ್ ಮುಂತಾದವರನ್ನೊಳಗೊಂಡ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ನರಸಿಂಹಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರ ಈಗ ಸೆನ್ಸಾರ್ ಹಂತದಲ್ಲಿದೆ