ಲೇಖಕ ಡಾ.ಕಶ್ಯಪ್ ದಾಕೋಜು ಮಾತನಾಡಿ, ಮಾನವ ಹುಟ್ಟಿದಾಗಲೇ, ಆತನ ಸಾವಿನ ಮುಹೂರ್ತ ತಿಳಿದುಬಿಟ್ಟರೆ ಏನಾಗಬಹುದೆಂಬ ವಿಷಯವನ್ನಿಟ್ಟುಕೊಂಡು ಹೆಣೆದಿರುವ ಕಥೆಯಿದು. ಅಮೆರಿಕಾದಲ್ಲಿ ವಿಜ್ಞಾನಿ ಆಗಿರುವ ಕಥಾನಾಯಕ ಬ್ರಹ್ಮ, ಹಲವಾರು ಪ್ರಾಣಿಗಳ ಮೇಲಿನ ಸಂಶೋಧನೆಯಿಂದ ಮಾನವನ ಸಾವಿನ ದಿನ, ಘಳಿಗೆಗಳನ್ನು ಕಂಡುಕೊಳ್ಳುತ್ತಾನೆ. ಮಾನವರಮೇಲೆ ಈ ಪ್ರಯೋಗಕ್ಕಾಗಿ ತನ್ನ ತಂದೆಯನ್ನೇ ವಸ್ತುವಾಗಿಟ್ಟುಕೊಳ್ಳುವ ಸಂದರ್ಭ ಬರುತ್ತದೆ. ತನ್ನ ಮಗನಿಂದಲೆ, ತನ್ನ ತಂದೆಯ ಸಾವಿನ ಮುಹೂರ್ತ ಇಟ್ಟಾಗ ನಡೆಯುವ ಸನ್ನಿವೇಶಗಳ ಈ ನನ್ನ ಪ್ರಯತ್ನದಲ್ಲಿ, ಕುತೂಹಲ, ಹಾಸ್ಯ, ಭಾವನಾತ್ಮಕತೆ, ಮಾನವ ಸಂಬಂಧಗಳು, ತತ್ವಜ್ಞಾನ ಎಲ್ಲವೂ ತೆರೆದುಕೊಳ್ಳುತ್ತದೆ’ಇದೊಂದು ಹೊಸ ಪ್ರಯೋಗ ಎನ್ನಬಹುದು ಎಂದು ಹೇಳಿದರು.