ವಿನೋದ್ ಪೂಜಾರಿ ಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಎಸ್.ಎನ್ ಸಂಗೀತ ನೀದಿದ್ದಾರೆ. ಆನಂದ್ ರಾಜವಿಕ್ರಂ ಹಿನ್ನೆಲೆಸಂಗೀತ, ಮಣಿ ಕುಕಲ್ ನಾಯರ್ ಛಾಯಾಗ್ರಹಣ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕಿಂಗ್ ಆಫ್ ಹಾರ್ಟ್ಸ್ ಎಂಟರ್ಟೈನ್ಸ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆರಂಜಿತ್ ಬಜ್ಪೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಭು ಮುಂಡ್ಕೂರು, ಕೆ.ಎಸ್.ಶ್ರೀಧರ್, ಕಾಜಲ್ ಕುಂದರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ಅಶ್ವಿನಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ತಾರಾಬಳಗದಲ್ಲಿದ್ದಾರೆ.