ಪವನ್ ತೇಜ್ ಈ ಚಿತ್ರದ ನಾಯಕ. ಶಂಕರ್ನಾಗ್ ಅಭಿಮಾನಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಶಿಲ್ಪಾ ಮಂಜುನಾಥ್ ಜೋಡಿಯಾಗಿದ್ದಾರೆ. ಬೆಂಗಳೂರು, ಮೈಸೂರು, ಕೇರಳ ಹಾಗೂ ಬಾಗಲಕೋಟೆಯ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಎಸ್.ಕೆ. ಬ್ರದರ್ಸ್ ಲಾಂಛನದಡಿ ಮೋಟಗಾನಹಳ್ಳಿಯ ಸಿ.ಎಂ. ಮಲ್ಲೇಶ್ ಬಂಡವಾಳ ಹೂಡಿದ್ದಾರೆ.