ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಮುನಿರತ್ನ ಕುರುಕ್ಷೇತ್ರ: ‘ಕೌರವ'ನಿಗೆ ಹೆಲಿಕಾಪ್ಟರ್‌ನಿಂದ ಪುಷ್ಪಾಭಿಷೇಕ

Last Updated 9 ಆಗಸ್ಟ್ 2019, 9:19 IST
ಅಕ್ಷರ ಗಾತ್ರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ'ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಾಧನ ಚಿತ್ರಮಂದಿರದಲ್ಲೂ ಬಿಡುಗಡೆಗೊಂಡಿದ್ದು, ದರ್ಶನ್ ಅವರ ಬಹು ಎತ್ತರದ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಸುಮಾರು ಅರ್ಧ ತಾಸಿಗೂ ಹೆಚ್ಚುಕಾಲ ಹೆಲಿಕಾಪ್ಟರ್ ಮೂಲಕ ಪುಷ್ಪಾಭಿಷೇಕ ನಡೆದಿದ್ದು, ಹೆಲಿಕಾಪ್ಟರ್ ನಿಂದ ಹೂವಿನ ಸುರಿಮಳೆ ಬೀಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು.

ದರ್ಶನ್ ಗೆ ಹೊಸಕೋಟೆಯಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದ್ದು, ವರಲಕ್ಷ್ಮಿ ಹಬ್ಬಕ್ಕಿಂತ ಮಿಗಿಲಾಗಿ ಕುರುಕ್ಷೇತ್ರದ ಬಿಡುಗಡೆಯನ್ನು ಆನಂದಿಸುತ್ತಿದ್ದಾರೆ.

ಇಡೀ ಚಿತ್ರಮಂದಿರ ಕಾಣದಂತೆ ಫ್ಲೆಕ್ಸ್ ಗಳು ತುಂಬಿದ್ದು, 43 ಅಡಿಯ 'ಕೌರವ'ನ ಕಟೌಟ್ ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರು. ಚಿತ್ರಮಂದಿರದ ಎದುರಿನ ಸರ್ವೀಸ್ ರಸ್ತೆಯ ತುಂಬೆಲ್ಲ ಅಭಿಮಾನಿಗಳು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT